ಕಣ್ಣಂಚಿನ ಈ ಕನಸಲಿ ಶೇ ೫೦ ಭಾಗ ಮುಕ್ತಾಯ
Posted date: 07 Thu, Jul 2016 – 09:41:20 AM

 ಕನಕಧಾರಾ ಕ್ರಿಯೇಷನ್ಸ್ ಲಾಂಚನದಲ್ಲಿ, ರಂಗರಾಜನ್, ಕಿಶೋರ್, ಕೌಸ್ತುಭಧರನ್ ನಿರ್ಮಾಣದ, ಕಣ್ಣಂಚಿನ ಈ ಕನಸಲಿ ಚಿತ್ರಕ್ಕೆ ನಗರದ ಸುತ್ತಮುತ್ತ ನಡೆದ ಚಿತ್ರೀಕರಣದೊಂದಿಗೆ ಶೇ. ೫೦ ಭಾಗ ಪೂರ್ಣಗೊಂಡಂತಾಗಿದೆ.
ಈ ಚಿತ್ರದ ನಿರ್ದೇಶನ ಧವನಿ-ಕೌಸ್ತುಭ್, ಛಾಯಾಗ್ರಹಣ - ಕೆ. ವಾಸುದೇವ್, ಸಂಗೀತ - ಹರ್ಷ, ಕಿಶೋರ್, ನಿರ್ವಹಣೆ - ಕೆ.ಎಸ್. ಸಂಗಮೇಶ್ ಅವರದ್ದು.
ಪರಿಸರ ಸಂರಕ್ಷಣೆಯ ಸಾಮಾಜಿಕ ಸಂದೇಶದ ಕಥಾ ಹಂದರ ಹೊಂದಿರುವ ಈ ಚಿತ್ರದ ತಾರಾಗಣದಲ್ಲಿ ಕೌಸ್ತುಭಧರನ್, ವರ್ಷಿಣಿ, ಅನನ್ಯಾ, ತರಂಗಿತ, ಹಂಸರಾಜ್, ಗಿರೀಶ್ ಜತ್ತಿ, ಹುಬ್ಬಳ್ಳಿ ಮಂಜುಳಾ, ರೂಪಶ್ರೀ, ಪಲ್ಟಿ ಗೋವಿಂದ ಅಲ್ಲದೆ, ವಿಶೇಷ ಪಾತ್ರದಲ್ಲಿ, ಸಂಚಾರಿ ವಿಜಯ್ ಮತ್ತು ವಿ. ಮನೋಹರ್ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed